ರಾಜ್ ಬಿಂಬ
ಪದ್ಮಭೂಷಣ ಡಾ.ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದರೂ ಅವರ ಪ್ರತಿಬಿಂಬ ನಮ್ಮೊಳಗೆ ಸಿನಿಮಾ ಮೂಲಕ ಕಾಡುತ್ತಲೇ ಇರುತ್ತದೆ. ಒಂದು ವೇಳೆ ಸಿನಿಮಾ ಇರದಿದ್ದರೂ, ರಾಜ್ಯ ರಾಜಧಾನಿಯ ಯಾವುದೇ ಪ್ರಮುಖ ಬೀದಿಗೆ ಕಾಲಿಟ್ಟರೂ ಅಲ್ಲೇ ಅನತಿ ದೂರದಲ್ಲಿ ರಾಜ್ ಅವರ ಪ್ರತಿಮೆಯೊಂದು ಅಕ್ಕರೆಯಿಂದ ನಮ್ಮತ್ತ ನೋಡುವಂತೆ ಕಡೆದು ನಿಲ್ಲಿಸಲಾಗಿರುತ್ತದೆ. ಒಬ್ಬ ನಟನ ಬಗ್ಗೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಪುಸ್ತಕಗಳೇನಾದರೂ ರಚಿಸಲ್ಪಟ್ಟಿದ್ದರೆ ಅದು ಡಾ.ರಾಜ್ ಅವರ ಬಗ್ಗೆ ಎನ್ನುವುದು ನಿಜ. ಅದೇ ರೀತಿ ಪ್ರತಿಮೆಗಳ ವಿಚಾರದಲ್ಲಿಯೂ ಅವರಿಗೆ ಅವರೇ ಸಾಟಿ. ಹಾಗಾಗಿಯೇ ಅಣ್ಣಾವ್ರ ಬಗ್ಗೆ ಹೊಸದಾಗಿ ಏನು ಬರೆಯಬಹುದು ಎಂದು ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ವಿಚಾರಿಸಿದಾಗ ಅವರು ನೀಡಿದಂಥ ಸಲಹೆ ಇದು. “ಅಪ್ಪಾಜಿಯವರ ಪ್ರತಿಮೆಯನ್ನು ನಾಡಿನ ಹಲವಾರು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿಯೊಂದರ ಸ್ಥಾಪನೆಗೆ ಕಾರಣವಾದ ಅಭಿಮಾನದ ಹಿಂದೆಯೂ ಒಂದೊಂದು ಕತೆಗಳಿರುತ್ತವೆ. ಅವುಗಳ ಅನಾವರಣ ಮಾಡುತ್ತಾ ಹೋದಂತೆ, ಅದು ಅಪ್ಪಾಜಿಯವರ ಅಭಿಮಾನಿ ದೇವರುಗಳ ಕುರಿತಾದ ಕುತೂಹಲದ ಮಾಹಿತಿಗಳನ್ನು ನೀಡುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಪ್ರತಿಮೆಯ ಶಂಕುಸ್ಥಾಪನೆಯ ಬಳಿಕ ಅವರನ್ನು ನೆನಪಿಸಿಕೊಳ್ಳುವವರೇ ಇರುವುದಿಲ್ಲ. ಆದರೆ ಅವರು ಮೂರ್ತಿಯ ಬಗ್ಗೆ ಕಾಳಜಿ ತೋರಿಸುತ್ತಿರುತ್ತಾರೆ. ಅವರ ಅಭಿಮಾನದ ಕತೆಯನ್ನು ಹಂಚಿಕೊಂಡರೆ ಅದು ಚೆನ್ನಾಗಿರುತ್ತದೆ’’ ಎಂದರು. ರಾಘಣ್ಣನ ಯೋಚನೆ ತುಂಬ ಆಸಕ್ತಿದಾಯಕವಾಗಿರುವ ಕಾರಣ ‘ರಾಜ್ ಬಿಂಬ’ ಎನ್ನುವ ಈ ಅಂಕಣದ ಮೂಲಕ ಅದನ್ನು ನೆರವೇರಿಸುತ್ತಿದ್ದೇವೆ.
ಹೆಚ್ಚಿನ ವಿವರಗಳು ಸದ್ಯದಲ್ಲೇ...



